ಸದಾನಂದ ಪೂಂಜಾ ಅವರಿಗೆ ಹುಟ್ಟೂರ ಶ್ರದ್ದಾಂಜಲಿ…

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬರoಗರೆ ಸದಾನಂದ ಪೂಂಜಾ ಅವರಿಗೆ ಹುಟ್ಟೂರ ಶ್ರದ್ದಾಂಜಲಿ ಸುಭಾಷ್ ನಗರ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮಾ.17 ರಂದು ಅರ್ಪಿಸಲಾಯಿತು.
ಶ್ರೀ ಶಾರದಾ ಪೂಜಾ ಸೇವಾ ಸಮಿತಿ, ಶುಭಾಷ್ ಯುವಕ ಮಂಡಲ, ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಆಡಳಿತ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮೃತರ ಸದ್ಗತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಜಿಪಮೂಡ ಏತನೀರಾವರಿ ಯೋಜನೆ, ಬ್ಯಾಂಕ್ ಶಾಖೆ, ಆಯುರ್ವೇದ ಆಸ್ಪತ್ರೆ, ಹಾಲಿನ ಸೊಸೈಟಿ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಯುವಕ ಮಂಡಲ, ಪಂಚಾಯತ್ ಅಧ್ಯಕ್ಷರಾಗಿ 40 ವರ್ಷಗಳ ಸುದೀರ್ಘ ಸೇವೆ,ಸದಾಶಿವ ದೇವಸ್ಥಾನ ಜೀರ್ಣೋದ್ಧಾರ, ಸಜಿಪಮಾಗಣೆ ಆಡಳಿತದಾರರಾಗಿ ವಾಚನಾಲಯ, ಸಮಾಜ ಮಂದಿರ ಮೊದಲಾದ ಅಭಿವೃದ್ಧಿ ಕಾರ್ಯಗಳಲ್ಲಿ ಶ್ರೀ ಬಿ ಸದಾನಂದ ಪೂಂಜಾರ ಕೊಡುಗೆ ಅಪಾರವಾದುದು ಎಂಬುದಾಗಿ ಸಜಿಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನುಡಿನಮನ ಸಲ್ಲಿಸಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬ್ರಹ್ಮಶ್ರೀ ನೀಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳು ಪೂಂಜಾರ ಧಾರ್ಮಿಕ -ಸಾಂಸ್ಕೃತಿಕ- ಶೈಕ್ಷಣಿಕ- ಸಾಮಾಜಿಕ- ರಾಜಕೀಯ-ಚಿಂತನೆಗಳನ್ನು ನೆನಪಿಸಿಕೊಂಡರು. ಕೆ ರಾಧಾಕೃಷ್ಣ ಆಳ್ವ, ಗಿರೀಶ್ ಕುಮಾರ್, ಸುದರ್ಶನ ಮಯ್ಯ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಕರ್ನಾಟಕ ಬ್ಯಾಂಕ್ ಸಜಿಪಮೂಡ ಶಾಖೆ ಪ್ರಬಂಧಕ ಮಿತಿಲೇಶ್, ಪಾಣೆಮಂಗಳೂರು ರೈತ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್, ಮೃತರ ಸುಪುತ್ರರಾದ ದೇವಿಪ್ರಸಾದ್ ಪೂಂಜಾ, ರಾಮ್ ಪ್ರಸಾದ್ ಪೂಂಜಾ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button