ಚಿತ್ರಕೂಟ ನಾಗ ಹಾಗೂ ರಕ್ತೇಶ್ವರಿ ಸಾನಿಧ್ಯಕ್ಕೆ ನೂತನ ಆರೂಢ ನಿರ್ಮಾಣ – ಶಿಲಾನ್ಯಾಸ…

ಬಂಟ್ವಾಳ: ಸಜೀಪನಡು ಗ್ರಾಮ ಕುಂಜತ್ತಬೈಲು ಕಲ್ಕುಡ-ಕಲ್ಲುರ್ಟಿ ದೈವಸ್ಥಾನದ ವಠಾರದಲ್ಲಿ ಸ್ವರ್ಣ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರವಾಗಿ ಚಿತ್ರಕೂಟ ನಾಗ ಹಾಗೂ ರಕ್ತೇಶ್ವರಿ ಸಾನಿಧ್ಯಕ್ಕೆ ನೂತನ ಆರೂಢ ನಿರ್ಮಾಣ ಮಾಡಲು ಇಂದು ಶಿಲಾನ್ಯಾಸ ನೆರವೇರಿತು.
ಸಜಿಪನಡು ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್ ಶಿಲಾನ್ಯಾಸ ನೆರವೇರಿಸಿದರು. ಭೂಮಿ ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳನ್ನು ಸಜಿಪಮಾಗಣೆ ತಂತ್ರಿ ಸುಬ್ರಮಣ್ಯ ಭಟ್ ಎಂ ನೆರವೇರಿಸಿಕೊಟ್ಟರು. ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ, ಹರೀಶ್ ಬಂಗೇರ, ರಾಮ, ಶಿವರಾಮ ಜೋಶಿ, ಪುರುಷೋತ್ತಮ, ವೆಂಕಪ್ಪ ನಾಯಕ, ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button