ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಮಳೆ , ಭೂಕಂಪ ದಿಂದ ಹಾನಿ – ತೆರವು ಕಾರ್ಯಾಚರಣೆ…

ಸುಳ್ಯ: ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಮಳೆ -ಭೂಕಂಪ ದಿಂದ ಹಾನಿಯದ ಎಲ್ಯಣ್ಣ ಗೌಡ ದಂಡೇಕಜೆ, ಅಮೀನಾ ಚಟ್ಟೆಕಲ್ಲು, ಡಾ ತಾಜ್ ಟರ್ಲಿ ಮನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ,ಸದಸ್ಯರುಗಳಾದ ಎಸ್. ಕೆ. ಹನೀಫ್, ಜಗದೀಶ್ ರೈ, ಮಾಜಿ ಪಂಚಾಯತ್ ಸದಸ್ಯರು ಗಳಾದ ತಾಜ್ ಮಹಮ್ಮದ್, ನಾಗೇಶ್ ಪಿ. ಆರ್, ಹಸೈನಾರ್ ಎ. ಕೆ. ಭೇಟಿ ಕೊಟ್ಟರು.
ದಂಡೇಕಜೆ ಭೂಕುಸಿತ ಪ್ರದೇಶಕ್ಕೆ ಗ್ರಹ ರಕ್ಷಕದಳದ ಗಿರೀಶ್ ವಿನೋದ್, ಸಚಿನ್, ಲಿಖಿತ್ ಗ್ರಾಮ ಸಹಾಯಕ ಸೋಮನಾಥ್, ಉಮೇಶ್ ಹಾಗೂ ಸಾರ್ವಜನಿಕರು ಮೆಸ್ಕಾಂ ಇಲಾಖೆಯ ಸಂಗಮೇಶ್, ನವೀನ್ ಡಿಸೋಜ, ಚಂದ್ರಶೇಖರ ಮೇಲಂಟ ಉಪಸ್ಥಿತರಿದ್ದರು. ತೆಂಗು, ಅಡಿಕೆ ಮರ ತೆರವು ಮಾಡಲಾಯಿತು, ಒಂದು ಕರೆಂಟ್ ಕಂಬ ಕಟ್ ಆಗಿದ್ದು ತೆರವು ಕಾರ್ಯ ನಡೆಯಿತು.

Sponsors

Related Articles

Back to top button